ಪೋಸ್ಟ್‌ಗಳು

ಜುಲೈ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
ಕನ್ನಡ ನಾಡು  ನುಡಿ  ಗರ್ವದಿಂದ ಹೇಳ್.. ಕನ್ನಡ ಪದಗಳ್.. ಈ ನಮ್.. ನುಡಿ,ಜನ,ನೆಲ ಚಂದ.  ಇವೆಲ್ಲವುಗಳ್.. ನಮ್ಮ ಕನ್ನಡ ನಾಡಿಗೆ ಭೂಷಣ.  ಪವಿತ್ರ ಕನ್ನಡ ನಾಡಿನ ನದಿಗಳಿವು ಕಾವೇರಿ,ಕೃಷ್ಣ,ಭೀಮ,  ನೇತ್ರಾವತಿ,ಕಾಳಿ,ತುಂಗೆ-ಭದ್ರೆಗಳ್..  ಕನ್ನಡ ಪದನುಡಿಗಳ್.. ಉಚ್ಚರಿಸು ಉಸಿರು ನಿಲ್ಲುವ ತನಕ, ಪ್ರಾಣಂ ತೆಗೆಯಲಿ ಅಭಿಮಾನವನೆಂದು ಬಿಡಲೊಲ್ಲೆ. ನನ್.. ಜೀವದ ರಕ್ತದಲ್ಲಿಹುದು ಕನ್ನಡದ ಭಕ್ತಿಭಾವ ನಲಿಯುತಾ ಹಾಡುವೆನು  ಕನ್ನಡವ ನನ್.. ಜೀವವಿರುವ ತನಕ.                                                        ಜೈಯೆಂಬೆನು ಕನ್ನಡಕ್ಕೆ, ಜೈಯೆಂಬೆನು ಕನ್ನಡ ನುಡಿ ಸಂಸ್ಕೃತಿಗೆ.  (ಮ.ನಾ.ಪ್ರವೀಣ)
|ಗಾಳಿಯು ಬೀಸುತಿದೆ ಮೂಡಣಕೆ  ತಂಪು ಬಾನಾಗಲಕೆ ಸದ್ದು ಗದ್ದಲವಾಗಿದೆ ಭುವಿಯೆಲ್ಲೆಡೆ ಹಕ್ಕಿಗಳ ಇಂಚರ ಧನಿ ಕೇಳದಾಗಿದೆ|  |ಗಾಳಿ ಬೀಸಿದೆ ಆಗಸದಿ ಮೋಡ ತರಿಸಿದೆ.  ಮೋಡಗಳು ತಾಕಿ ಗುಡುಗು ಸಿಡಿಲು ಬಡಿದಿದೆ  ಮಳೆಯೆಂಬ ಕಳೆಯನು ಭುವಿಯ ತಣಿಸಿದೆ|
ಇಮೇಜ್
ಯುಗಾದಿ ಮಾವು ಚಿಗುರಿದೆ,ಬೇವು-ಹೊಂಗೆ ಹೂ ಅರಳಿದೆ.ಯುಗಾದಿಯ ಸಂಭ್ರಮದಲ್ಲಿ.  ಹಳೆ-ಬೆಳೆ-ಕಳೆಯು ಹೋಗಿದೆ ಹೊಸತನ ಹೊಳಪನು ತಂದಿದೆ. ಚಳಿಗಾಲ ಮುಗಿದಿದೆ,ಬೇಸಿಗೆ ದಗೆಯು ಹೆಚ್ಚಿದೆ.  ದಗೆ-ಬೆಗೆಯನ್ನು ತಣ್ಣಿಸಲೆಂದು ಮರ-ಗಿಡಗಳು ಚಿಗುರಿ ತಂಪು ಗಾಳಿಯು ಬೀಸುತಿದೆ.  ಮಾಮರದ ಅ ತಂಪಿಗೆ ಕೋಗಿಲೆ ಧನಿಯು ಕಂಪನು ನೀಡಿದೆ.  ಧರೆಗೆ ಸೂರ್ಯಕಿರಣದ ಕಾಂತಿ ಹೆಚ್ಚಿಸುತಿದೆ. ಪ್ರಕೃತಿಯಿಂದು ಹೊಸಚೈತನ್ಯವ ಮೂಡಿಸಿದೆ.   ಯುಗಾದಿಯ ಈ ಹೊಸತನದಿಂದ ತನುಮನವು ಹರುಷದಿ ಕುಣಿದಾಡಿದೆ.
ಬೆಂಕಿ ಮಳೆ..ಬೆಂಕಿ ಮಳೆ.. ಬರಬಾರದೇ ಈ ಬರದ ಧರೆಗೆ, ಒಣಮರವು ಉರಿದು ಹೊಸಚಿಗುರು ಬೆಳೆದು, ಹಸಿರು ನೆಲವಾಗಿಸಬಾರದೇ ಒಡಕಿನ ಈ ಧರೆಗೆ, ನೀರಹರಿಸಬಾರದೇ ಸುತ್ತ ಹಸಿರ ಹಾಸು ಕಂಗೋಳಿಸಬಾರದೇ, ಓ ಮಳೆಯೇ..ಜಡಿಮಳೆಯೇ ..ಬರ ಧರೆಯ ಒಡಲ ಹಸಿವ ನೀಗಿಸಿ ಮುಖ ಬಾವಕೆ ಕಳೆ ನೀಡಿದಂತಾದರೆ ಹಸಿರನುಸಿರನು ಧಾರೆಯರೆದಂತಾಗುವುದು. ಪ್ರಾಣಿಪಕ್ಷಿಗಳ ಹಸಿವ ನೀಗಿಸಿ ಸಂತಸ ಗೊಳಿಸಬಾರದೇ, ಬಾ ಮಳೆಯೇ ಬಾ ಬೀರುಸಾಗಿ ಸುರಿಯುತಾ ,ಹಿಬ್ಬನಿಯಪಟಪಟನೆ ಸುರಿಯುತಾ,ಹೊಳಪೇ ಬೆಳಕಾಗಿ ಮೂಡುತಾ ಬಾ ಮಳೆಯೇ ತಂಪು ಗಾಳಿಯನು ಬೀಸುತ, ಮಳೆಯೇ..! ಬೆಂಕಿ ಮಳೆಯೇ..!

ಅರುಣ ಶಾನುಭಾಗ್ ಸವಿನೆನಪಿಗಾಗಿ

ಇಮೇಜ್
¤ಅರುಣ ಶಾನುಭಾಗ್ ಸವಿನೆನಪಿಗಾಗಿ¤ ಅರುಣೋದಯದ ದಿವ್ಯ ದೀಪ.  ಮನಮನಗಳ ಬೆಳಗಿದ ದೀಪ ನಿನ್ನ ಸೇವೆಗೆ ನೀನೆ ಚಿರಋಣಿ. ಓ ಅರುಣ.. ಓ ಅರುಣ.. ಪಾಪದ ಜಗದ ಉರುಳಿಗೆ ಕೊರಳ ನೀಡಿದೆ. ದುಷ್ಟ ಮನದ ಪಾಪ ಕೃತ್ಯಕ್ಕೆ ಬಲಿಯಾದೆ. ದಶಕ ಕಳೆದರು ಮೇಲೆದ್ದು ಮಾತನಾಡದೆ. ವರುಷದಿಂದ ವರುಷಕೆ ಆರೈಕೆ ಪಡೆದೆ. ಮನುಜ ಕುಲವ ಎಚ್ಚರಿಸಿದೆ ನೋವುಗಳನ್ನು ಉಂಡು. ಕರುನಾಡ ಸಿಧ್ದಿ ದೀಪವೇ ಛಲಗಾತಿಯೇ. ದಾದಿಯಾಗಿ ಸೇವೆ ಮಾಡಿ  ದಾದಿಯರಿಂದಲೇ ಸೇವೆ ಪಡೆದೆ ನ್ಯಾಯವಿಂದು ಸಿಗಲಿಲ್ಲ,  ದಯಾಮರಣ ಕೊಡಲಿಲ್ಲ, ಬದುಕಿರುವುದು ಎಷ್ಟು ದಿನ?  ಅನುಮಾನ,ಅಪಮಾನ,ಈ ಜನಕೆ ತಿಳಿಯಲಿಲ್ಲ  ಅರುಣೋದಯದ ದಿವ್ಯ ದೀಪ ಉಜ್ವಲಿಸದೆ ಮರೆಯಾದೆಯೇ  ಹೆಣ್ಣು ಕುಲದ ದಿವ್ಯ ತೇಜವೇ , ಓ ಅರುಣ.. ಓ ಅರುಣ.. ಈ ನಾಡ ಕಿರಣ.  >>ಮ. ನಾ.ಪ್ರವೀಣ<<