ಅರುಣ ಶಾನುಭಾಗ್ ಸವಿನೆನಪಿಗಾಗಿ

¤ಅರುಣ ಶಾನುಭಾಗ್ ಸವಿನೆನಪಿಗಾಗಿ¤


ಅರುಣೋದಯದ ದಿವ್ಯ ದೀಪ. 
ಮನಮನಗಳ ಬೆಳಗಿದ ದೀಪ ನಿನ್ನ ಸೇವೆಗೆ ನೀನೆ ಚಿರಋಣಿ.
ಓ ಅರುಣ.. ಓ ಅರುಣ..
ಪಾಪದ ಜಗದ ಉರುಳಿಗೆ ಕೊರಳ ನೀಡಿದೆ.
ದುಷ್ಟ ಮನದ ಪಾಪ ಕೃತ್ಯಕ್ಕೆ ಬಲಿಯಾದೆ.
ದಶಕ ಕಳೆದರು ಮೇಲೆದ್ದು ಮಾತನಾಡದೆ.
ವರುಷದಿಂದ ವರುಷಕೆ ಆರೈಕೆ ಪಡೆದೆ.
ಮನುಜ ಕುಲವ ಎಚ್ಚರಿಸಿದೆ ನೋವುಗಳನ್ನು ಉಂಡು.
ಕರುನಾಡ ಸಿಧ್ದಿ ದೀಪವೇ ಛಲಗಾತಿಯೇ.
ದಾದಿಯಾಗಿ ಸೇವೆ ಮಾಡಿ 
ದಾದಿಯರಿಂದಲೇ ಸೇವೆ ಪಡೆದೆ ನ್ಯಾಯವಿಂದು ಸಿಗಲಿಲ್ಲ,
 ದಯಾಮರಣ ಕೊಡಲಿಲ್ಲ, ಬದುಕಿರುವುದು ಎಷ್ಟು ದಿನ? 
ಅನುಮಾನ,ಅಪಮಾನ,ಈ ಜನಕೆ ತಿಳಿಯಲಿಲ್ಲ
 ಅರುಣೋದಯದ ದಿವ್ಯ ದೀಪ ಉಜ್ವಲಿಸದೆ ಮರೆಯಾದೆಯೇ
 ಹೆಣ್ಣು ಕುಲದ ದಿವ್ಯ ತೇಜವೇ ,
ಓ ಅರುಣ.. ಓ ಅರುಣ.. ಈ ನಾಡ ಕಿರಣ.



 >>ಮ. ನಾ.ಪ್ರವೀಣ<<

ಕಾಮೆಂಟ್‌ಗಳು