ಪೋಸ್ಟ್‌ಗಳು

ಸೆಪ್ಟೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜಮೀನು

ಇಮೇಜ್
  ಜಮೀನು ಯಾಕ್ರಿ ನೂರು ಎಕರೆ.. ಜಮೀನು ನಿಮಗ. ಹೊಟ್ಟೆ ಹಸಿದಿದೆ ಉಣ್ಣಕ್ಕಿಲ್ಲ ನಮಗ. ಕೋಟಿ.. ಕೋಟಿ.. ಇದ್ದರೂನು ಇನ್ನೂ ಬೇಕು .  ಹೆಂಡ್ರು ಮಕ್ಳು ಸಾಕಕ್ಕೆ, ನೀವು ಕೊಡೊ ನೂರಿನ್ನೂರು ಸಾಕಗ್ತಿಲ್ಲ ನಮಗ. ಹಸಿವ ನಿಗಿಸಲು ತುಪ್ಪದ ಊಟ, ಮಾನ ಮುಚ್ಚಲು ದುಬಾರಿ ಬಟ್ಟೆ ಬೇಕಿಲ್ರಿ ನಮಗ .  ಬೀಸುವ ಗಾಳಿಯಲ್ಲಿ ಸುರಿಯುವ ಮಳೆಯಲಿ  ದಿನವು ಕೆಲಸ ಮಾಡಲೆಬೇಕು ನಾವು. ನಾವ್ಮಡದೆ ಸುಮ್ಮನೆ ಕುಂತ್ರೆ ಉಪವಾಸ ನಮಗೂ. ಕಾಯಕ ಎನ್ನೋದ್ ನಮ್ಮ ಪುಣ್ಯದ ನಮಗೆ  ಎಸೆ ಕಷ್ಟವಾದರೂನು ಸಹಿಸ್ಕೊಂಡು ಕೆಲ್ಸ ಮಾಡ್ತಿವ್ ನಾವು... (ಮ.ನಾ.ಪ್ರವೀಣ )

ಬಯಲು ಸೀಮೆ

ಇಮೇಜ್
 ಬಯಲು ಸೀಮೆ ಈ ಬಯಲು ಸೀಮೆಯ ಬರಡು ನೆಲದಲ್ಲಿ.  ಬಂಗಾರದ ಎಸಳಲಿ ಆಬರಣ ಮಾಡಿದಂತೆ,  ಹನಿಹನಿಯ ನೀರಲಿ ಬೆಳೆಗಳ ಬೆಳೆಯುವೆವು ಬೆವರ ಹರಿಸಿ ನಾವು . ತಿಂಗಳು ಕಳೆದರೂ ಮಳೆಹನಿಯ ಕಾಣೆವು ನಾವು . ಸಾವಿರ ಅಡಿಯವರೆಗೆ ಧರೆಯ ಕೊರೆದರು ನೀರಂತು ಸಿಗಲಿಲ್ಲ  ಶಾಶ್ವತ ನೀರಾವರಿ ಬೇಕಿದೆ ದಣಿದಿರುವ ಮಡಿಲಿಗೆ ಜಲದಾರೆ ಹರಿಯಬೇಕಿದೆ  ಮನವನ್ನು ಕೂಡ ತಣಿಸಬೇಕಿದೆ ಈ ಕಷ್ಟದಲ್ಲೂ ಬೆಳೆವ ಬೆಳೆಗಳಿಗೆ ಬೆಲೆಯೇ ಇಲ್ಲ  ಕಣ್ಣೀರ ಹರಿಸಿದರೂ ಕೇಳುವವರು ಯಾರಿಲ್ಲ.  ಈ ಬಯಲು ಸೀಮೆಯ ಕಷ್ಟ ಕೇಳಿರಯ್ಯ..ನೋಡಿರಯ್ಯ.. (ಪ್ರವೀಣ.ಮ.ನಾ)

ಗುರು ವಂದನೆ

ಇಮೇಜ್
ಗುರು ವಂದನೆ...  ಗುರು ವಂದನೆ...  ಗುರುವೇ ನಿನಗೆ. ಅಮೂರ್ತ ಶಿಲೆಗೆ ಮೂರ್ತರೂಪವನ್ನು ಕೊಟ್ಟವವನು ನೀನೆ..  ಓ ಗುರುವೇ... ಓ ಪ್ರಭುವೇ... ತಿದ್ದಿ ತೀಡಿ ಅಕ್ಷರವ ಕಲಿಸಿದವನು ನೀನೇ..  ಅಜ್ಞಾನಿಯನ್ನು ವಿಜ್ಞಾನಿಯಾಗಿಸಿದವನು ನೀನು.  ಶಾಂ ತಿ ಸಹನೆ ಸಹಬಾಳ್ವೆ ಪರಿಪಾಠ ಕಲಿಸಿದ ಮಹಾತ್ಮ ನೀನು.   ಬೇಧ ಭಾವ ಮರೆಸಿ ಸ್ನೇಹಹಸ್ತ ಚಾಚಿದವನು ನೀನು.  ಓ ಗುರುವೇ ಓ ಪ್ರಭುವೇ ನಿನಗೆ ವಂದನೆ .   (ಮ.ನಾ. ಪ್ರವೀಣ)

ನವ ವಿಶೇಷ

ಇಮೇಜ್
ನವ ವಿಶೇಷ  ನವರಸಗಳು ನವರಾತ್ರಿಯ ನವಜೋಡಿಯ ಮನದಲ್ಲಿನ ಮಹಲುಗಳು.   ಕಟ್ಟಲಿರುವ ಕನಸುಗಳ ಕೋಟೆಗಳ ವೈಭವದಲ್ಲಿ. ನೀಲಿಭಾನು ಕಾಣದಂತೆ ಕವಿದಿರುವ ಕಾರ್ಮೋಡಗಳು. ಮಳೆಯ ಸಿಂಚನದಿ ಧರೆಯೊಡಲು ಹಸಿರಾಗಿಸಿ.   ನವವಸಂತ ಮಾಸದ ಮೆರುಗನ್ನು ಮುಡಿಸುತಲಿ. ಬಂಜರುತನ ಭಾವವನ್ನು ಬಡಿದೊಡಿಸಿ.   ಫಲವಂತಿಕೆಯ ಪಸಲನ್ನ ಪಡೆಯುತ್ತಲಿ.  ಸಾಧನೆಗಳ ಸವಾಲನ್ನು ಮೆಟ್ಟಿ ನಿಲ್ಲುತಲಿ . ಬಹಿರಂಗದ ಸಮಾಜದ ಬಲಾತ್ಕಾರ,  ಅಂತರಂಗದ ಅಹಂಕಾರ ಬಡಿದೊಡಿಸಿ.  ನವಸಮಾಜ ನಿರ್ಮಾಣ ನವಯುವಕರ ಛಲವಂತಿಕೆಯಲ್ಲಿದೆ .  (ಮ.ನಾ. ಪ್ರವೀಣ)