ಬೇಲಿ ಹಾರುತಿದೆ ಹೊಲದ ಕಡೆಗೆ .ಜೀವನವು ಸಾಗುತಿದೆ ಭಯದ ನೆರಳಲ್ಲಿ. ಬೆಳಕು ಕೊಡುವ ದೀಪವೇ ಕತ್ತಲನು ಕೊಡುತಿದೆ. ದಾರಿ ತೋರುವ ಗುರುವೇ ತಪ್ಪಿಸುತ್ತಿರುವ ಮಾರ್ಗವ.ದಯ ತೋರು ದೇವನೇ ಈ ಪಾಪದ ಜಗವ. ಕನಸು ಕರಗುತಿದೆ ನಂಬಿಕೆಯ ವಂಚನೆಯಲ್ಲಿ.ಮನಸು ನೊಂದಿದೆ ಪಾಪದ ಕಾರ್ಯದಲ್ಲಿ. ಪ್ರೀತಿ ತಪ್ಪಿದೆ ಚಪಲದ ಆಸೆಗೆ. ಪರಿತಪಿಸಿದೆ ಜೀವವು ತನ್ನದೇ ನೆರಳಲ್ಲಿ .ಪಾಲಿಸು ದೇವನೇ ಈ ಪಾಪದ ಮನವ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ